Sunday, March 8, 2009

ಸುನಾಮಿ.....



ಸತತ ಸುರಿದ ಮಳೆಯಲ್ಲಿ
ಗುರುತಿಸದಾದೆ ಕಣ್ಣೀರ ಹನಿಗಳ
ಹಿಂದೆ ಮುಂದೆ ಬರುವವರ ಗಮನಿಸದಾದೆ..

ಕಹಿ ನೆನಪುಗಳ ಭೀಕರ ಗಾಳಿ
ಭಾವೊದ್ವೇಗಗಳ ಸುಳಿ
ಹೆಜ್ಜೆಯಿದಲಾರದೆ ಮನದ ತೊಯ್ದಾತದಲಿ
ಕುಳಿತುಬಿಟ್ಟೆ ಒಂದು ರಸ್ತೆ ಬದಿಯಲಿ...

ಬೇಡವೆಂದರೂ ಬೆನ್ನಟ್ಟಿ ಬರುತ್ತಿದೆ
ಸಹಿಸಲಾಗದ ನೋವಾವರಿಸುತ್ತಿದೆ
ಕ್ಷಣ ಕ್ಷಣಕ್ಕೂ ದೇವನ ಮೊರೆಹೊಕ್ಕುತ್ತಿದೆ

ಅಮ್ಮ ತುಂಬಿದ ಆತ್ಮಸ್ಥೈರ್ಯ,ವಿಶ್ವಾಸ
ಪುಟ್ಟ ತಂಗಿಯ ಮೊಗದ ಮಂದಹಾಸ
ಸಾಕೆನಗೆ ಮಾಡಲು ಹೆದರದೆ ಸಾಹಸ..

ಎದುರಿಸದೆ ಕಷ್ಟಗಳ ಹೆದಿಯಾಗಲಾರೆ..
ಮಾತಿನಿಂದಲೇ ಚುಚ್ಚುವವರ ದ್ವೆಶಿಯಾಗಲಾರೆ
ಮುಂದಿಟ್ಟ ಹೆಜ್ಜೆಯ ಹಿಂದೆಗೆಯಲಾರೆ.....

No comments: