Sunday, March 8, 2009

ಅಜ್ಞಾನ....



ಸುತ್ತಲೂ ಹೆಣೆದುಕೊಂಡ ಬಲೆಗೆ
ತಾನೇ ಕಾರಣವಾದರೂ ಜೇಡ
ಇದನರಿಯದೆ ಮುಂದುವರೆಸಿ
ಹೊರಬರಲು ತೊಳಲಾಡಿ
ಸಾಯುವುದು ಅದರಲ್ಲೇ...


ಹೊರತಲ್ಲ ಮನುಜ ಇದಕೆ
ಆಸೆ,ಕನಸುಗಳ ಹೊತ್ತ
ತನ್ನದೇ ಸಾಮ್ರಾಜ್ಯದಲ್ಲಿ
ಅಸ್ಪಸ್ಥ,ಅಸ್ಥಿರ ನಿದ್ರಾಲೋಕದಲ್ಲಿ
ಕೇವಲ ಕಲ್ಪನೆಗಳಿಂದ ಸುಖಿಸಿ
ನೈಜ ಜೀವನಕ್ಕೆ ಹೆದರಿ
ದೇವರ ಶಪಿಸಿ ಬಾರಿ ಬಾರಿ.....

ನೋಡುವರು ಆಕಾಶದತ್ತ
ಸೂರ್ಯನಬೆಳಕಿರಲಿ ಚಂದಮನೂ
ತನ್ನ ಬೆಳದಿಂಗಳ ಇವರೆಡೆಗೆ
ಕಾತುರದಿಂದ ನೀಡಲು ಅಡಿಗಡಿಗೆ
ಸನಿಹ ಬಂದರೂ,ಮನುಜ ತನ್ನ
ಬಲೆಯಿಂದ ಬರದಾದನು ಹೊರಗೆ
ಬರಿಯ ಕತ್ತಲೆಯಲಿ ಮುಳುಗಿ
ಅಳುವುದಕೂ ನಿಸ್ಶಕ್ತನಾಗಿ
ಪಯಣಿಸುವನು ಕೊನೆಗೆ ಸ್ಥಿರವಾಗಿ....



No comments: