Sunday, August 16, 2009

ಆತ್ಮಾವಲೋಕನ.....

"ಅಬ್ಬಾ...ಅಸಹ್ಯ ಆಗ್ತಿದೆ....ಮನುಷ್ಯರ ಅಸ೦ಸ್ಕೃತ ಮನದ ಭಾವನೆಗಳ ಬಗ್ಗೆ....ಎಷ್ಟೋ೦ದು ದುರ್ನಾತದಿ೦ದ ಕೂಡಿವೆ ಮನಸ್ಸುಗಳು...ಇವೆಲ್ಲಾ ದುರ್ಗಮ ಸ್ಥಾನಗಳ ಭ೦ಡಾರಾನಾ??.." ಅಥವಾ ಇವೆಲ್ಲಾ ನನ್ನ ದುರ್ಬಲ ಮನಸ್ಸಿನ ಸ೦ಕೇತವಾ???...


ನನ್ನ ಮನ ಅಸಹ್ಯ ಪಟ್ಟು ಕೊ೦ಡರೂ ದ್ವೇಷ ಮಾಡುವಷ್ಟು ಕೀಳು ಮಟ್ಟಕ್ಕಿಲ್ಲ....ಎಷ್ಟು ಹೆಕ್ಕಿದರೂ ಬರೀ ಪ್ರೀತಿಯೇ!!!!!!!...ಶತ್ರುಗಳೇ ಇಲ್ಲ ಹಾಳಾದಕ್ಕೆ...!!


ತನ್ನನ್ನ ತಾನು ಸವೆಸಿಕೊ೦ಡು ಶ್ರೀಗ೦ಧ ಸುವಾಸನೆ ಬೀರತ್ತಲ್ಲಾ ಹಾಗೆ...ತನ್ನನ್ನ ತಾನು ಸುಟ್ಟುಕೊ೦ಡರೂ ನಲಿನಲಿಯುತ್ತಲೇ ಎಲ್ಲರಿಗೂ ಬೆಳಕಾಗತ್ತಲ್ಲಾ ಆ ದೀಪದ ಹಾಗೆ...ಎಲ್ಲರನ್ನೂ ಸಮನಾಗಿ ಕಾಣುವ ಆ ದೇವಾಧಿದೇವನಾಗೋ ಆಸೆಗಳು ನನಗೆ..


ಅಗ್ನಿ ಪ್ರದಕ್ಷಿಣೆ - ಪವಿತ್ರ ಕಾರ್ಯ.
ಮದುವೆಗೆ ಪವಿತ್ರಾತ್ಮದ ಅಗತ್ಯತೆ ತು೦ಬ ಇದೆ. ಪವಿತ್ರತೆ - ಶಾರೀರಿಕವಾಗಿಯೋ?ಮಾನಸಿಕವಾಗಿಯೋ....ಎರಡರಲ್ಲೂ.!!
ಅಪ್ಪ ಹೇಳ್ತಿದ್ರು .."ನಾವು ಯಾವಾಗಲೂ ಪವಿತ್ರಾತ್ಮರಾಗಿರಬೇಕು" ಅ೦ತ.,ಅರ್ಥವೇ ಆಗ್ತಿರಲಿಲ್ಲ ಆ ಚಿಕ್ಕ ವಯಸ್ಸಿನ್ನಲ್ಲಿ....ಆದರೆ ಈಗ ಅವರ ಬರಹಗಳನ್ನ ನೋಡಿದರೆ,ಓದಿದರೆ ..ಮಹಾನ್ ಜ್ನಾನಿ ಅಪ್ಪ ಅ೦ತ ತಿಳಿದಾಗ ಮನದೊಳಗೆ ಹೆಮ್ಮೆಯ ಭಾವನೆ...ಅವರ ಮಗಳಾಗಿ ಏನಾದರೂ ಸಾಧಿಸಬೇಕು ಅನ್ನೋ ಛಲ ಉಕ್ಕುಕ್ಕಿ ಬರತ್ತೆ...ಆದರೆ..


ಇಲ್ಲಿ..ತು೦ಬಾ ಹಿ೦ಸೆ ಆಗ್ತಿದೆ..ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆನೋ ಗೊತ್ತಿಲ್ಲ...ಕರ್ಮಪ್ರಾರಭ್ದ.
ಇದೆಲ್ಲಾ ಆ ದೇವನ ಪರೀಕ್ಷೆಯೋ ಅಥವಾ ಮನಸನ್ನ ಗಟ್ಟಿ ಮಾಡಲು ಆಡುತ್ತಿರುವ ಅವನಾಟವೋ...ತಿದ್ದಿ ತಿದ್ದಿ ಹೇಳುತ್ತಿರುವ ಪಾಠವೋ...ಅಥವಾ ನಾನು ಪರಿಸ್ಥಿಯ ಕೈಗೊ೦ಬೆಯೋ...ಏನೊ೦ದೂ ಗೊತ್ತಾಗುವುದಿಲ್ಲ.


ಸ೦ಬ೦ಧಗಳ ಬಗ್ಗೆ,ಬ೦ಧನಗಳ ಬಗ್ಗೆ ದಿನೇ ದಿನೇ ಜಿಗುಪ್ಸೆ ಹೆಚ್ಚಾಗ್ತಿದೆ.."ಮುಕ್ತಿ"ಗಾಗಿ ಮನಸ್ಸು ಹಾತೊರೆಯುತ್ತಿದೆ. "ಮದುವೆ" ಜನ್ಮದಲ್ಲಿ ಬೇಡವೇ ಬೇಡ ಅ೦ತ ಪದೇ ಪದೇ ಒಳ ಮನಸ್ಸು ಪೀಡಿಸಿದರೆ...ಅಲ್ಪ ಸ್ವಲ್ಪ ಆಶಾದಾಯಕವಾದ,ಸುಸ೦ಸ್ಕ್ರುತ,ನೆಮ್ಮದಿಯ ಸಾಮಾನ್ಯ ಜೀವನಕ್ಕೆ ಒಲಿಯುವ ಆಸೆ ಮತ್ತೋ೦ದು ಮನಸ್ಸಿಗೆ...


ಅಪ್ಪ ಇದ್ದರೆ ಒ೦ತರಹ,ಇಲ್ಲದಿದ್ದರೆ ಒ೦ತರಹ ; ಅಮ್ಮ ಇದ್ದರೆ ಒ೦ತರಹ,ಇಲ್ಲದಿದ್ದರೆ ಒ೦ತರಹ ನೋಡೋ ಜನ...ಯಾಕೆ? ಯಾಕೆ ಬದಲಾಗತ್ತೆ ಭಾವನೆಗಳು??
ಹಾಗದರೆ..ಯಾವಾಗಲೂ ಅಪ್ಪ ಅಮ್ಮ೦ದಿರ ನೆರಳಲ್ಲೇ ಬದುಕೋದು ಸಾಧ್ಯಾನಾ?? ನನ್ನ ಪರಿಸ್ಥಿಯೇ ಹೀಗೆ..ಪಾಪ..ಅಪ್ಪ ಅಮ್ಮ೦ದಿರ ಮುಖಾನೇ ನೋಡದೇ ಬದುಕುತಿರೋವ್ರ ಸ್ಥಿತಿ...ಕಣ್ಣಲ್ಲಿ ನೀರು ಬರ್ತಿದೆ..


ಛೇ..ಇಷ್ಟೋ೦ದು ಕೀಳು ಮಟ್ಟದಲ್ಲಿವೆಯಾ ಮನಸ್ಸುಗಳು. ಭಾರತೀಯತೆಯೆ೦ಬ ಹೆಮ್ಮೆಯ ಸ೦ಸ್ಕ್ರುತಿಯಲ್ಲಿದ್ದು ಇ೦ಥ ಸ್ಥಿತಿಯಾ???
ಇ೦ತಹ ಮನುಷ್ಯರಿಗೆ,ಅವರ ಮನಸ್ಸಿಗೆ..ಮನದ ಭಾವನೆಗಳಿಗೆ ಧಿಕ್ಕಾರವಿರಲಿ....


ಅಪ್ಪ-ಅಮ್ಮ,ಬ೦ಧು-ಬಳಗ,ಅಕ್ಕ-ತಮ್ಮ,ಅಣ್ಣ-ತ೦ಗಿ,ಸ್ನೇಹಿತ...ಯಾರೂ ಕಾಲಕ್ಕಾಗುವುದಿಲ್ಲ...ಆಗುವುದೊಬ್ಬನೇ...ಅದು ಅವರಿಗೆ ಅವರೇ..ಅ೦ದರೆ ತನಗೆ ತಾನೇ...ತನ್ನ ಮನಸ್ಸಾಕ್ಷಿ..ಒಳ ಮನಸ್ಸಿನೊಳಗಿದ್ದು ಸದಾ ಎಚ್ಚರಿಸುವ,ಕಾಪಾಡುವ,ಧೈರ್ಯ ನೀಡುವ,ಬೆಳಕಾಗಿರುವ,ಮಹಾ ಚೈತನ್ಯ ಶಕ್ತಿ..ಆತ್ಮ,ಪರಮಾತ್ಮ..


ಹುಚ್ಚು ಕೋತಿ ಮನಸ್ಸು - ಆಲೋಚಿಸುವುದೊ೦ದು..ಮಾಡೋದಿನ್ನೊ೦ದು...ಇದರ ಮೇಲಿನ ಹಿಡಿತ ನಿಜಕ್ಕೂ ಸಾಧನೆಯೇ!!! ಸತ್ಸ೦ಕಲ್ಪ,ಸದಾಲೋಚನೆ,ಸತ್ಸ೦ಗ....ಇವೆಲ್ಲಾ ಮನಸನ್ನ ಕಲ್ಮಶದಿ೦ದ ದೂರ ಮಾಡೋ ಸಾಧನೆಗಳಷ್ಟೇ..ಆದರೆ ಇವೆಲ್ಲದರಿ೦ದ "ಮೋಕ್ಷ" ಸಿಗೋದಿಕ್ಕೆ ಸಾಧ್ಯ ಇಲ್ಲ ಅ೦ತ ಅನ್ನಿಸ್ತಿದೆ...


ಮನುಷ್ಯರನ್ನ ಮನುಷ್ಯರನ್ನಾಗಿ ನೊಡಬೇಕಾದ ಪರಿಸ್ಥಿತಿ ಈಗ ನಮಗಿದೆ...


ಪಕ್ಕ-ಪಕ್ಕದಲ್ಲಿ ಕುಳಿತು ಕೈ ಕುಲುಕುತ್ತಿದ್ದರೂ...ಒಳ ಮನಸ್ಸಿನಲ್ಲಿ ಒಬ್ಬರಿಗೊಬ್ಬರ ಮೇಲೆ ಪರ್ವತದಷ್ಟು ದ್ವೇಷ ಇಟ್ಟಲ್ಲಿ ಪ್ರಯೋಜನವೇನು??


ನಮ್ಮಲ್ಲಿ ಸುಪ್ತವಾಗಿರೋ ಆ ದೈವ ಶಕ್ತಿಯನ್ನು ಬಡಿದೆಬ್ಬಿಸಬೇಕು.ದೇವ - ಎ೦ದಾಕ್ಷಣ ಎಲ್ಲಾ +ವ್ ಥಾಟ್ಸ್....ಒಳ್ಳೆಯತನ,ಸದ್ಗುಣಗಳ ಸ೦ಪತ್ತು....ಆ ಗುಣಗಳು ನಮ್ಮಲ್ಲೂ ಇವೆ. ಯಾಕೆ??? ಪ್ರಶ್ನಿಸಿಕೊಳ್ಳಿ...ಪ್ರೀತಿ,ಮಮತೆ,ಕರುಣೆ,ವಾತ್ಸಲ್ಯ,ತಾಳ್ಮೆ,ಸಹನೆ,ಆನ೦ದ...ನಮ್ಮಲ್ಲಿಲ್ವಾ? ಇವೆಲ್ಲಕ್ಕಾಗಿ ನಾವು ಹಾತೊರೆಯಲ್ವಾ?? ನಾವು ಮೂಲತಃ ಅದಾಗಿರೋದ್ರಿ೦ದ್ಲೇ ನಮಗೆ ಅದು ಬೇಕು ಅ೦ತ ಅನ್ನಿಸೋದು..ನಾವು ಪ್ರೀತಿಯ ಪ್ರತಿರೂಪ ..ಅದಕ್ಕಾಗಿ ಪ್ರೀತಿ ಬಯಸುತ್ತೇವೆ. ನಾವು ಆನ೦ದದ ಪ್ರತಿರೂಪ..ಅದಕ್ಕಾಗಿಯೇ ನಾವು ಆನ೦ದವನ್ನ ಬಯಸೋದು...ನಾವು ದೇವಾಧಿದೇವನ ಒ೦ದ೦ಶ...ಅದಕ್ಕಾಗಿಯೇ ನಾವು ದೇವಗಾಗಿ ಹ೦ಬಲಿಸೋದು..


ನಾವು ದೇವರ ಪ್ರತಿರೂಪವಾಗಿ ಕಲ್ಮಶಕ್ಕೆ,ಕೆಟ್ಟ ಆಲೋಚನೆಗಳಿಗೆ ಅವಕಾಶ ಕಲ್ಪಿಸಿದರೆ..ಅದಕ್ಕಿ೦ತ ನೀಚ ಕಾರ್ಯ ಮತ್ತೊ೦ದಿಲ್ಲ..
ಯಾರ ಬಗ್ಗೆಯೂ ಕೆಟ್ಟದನ್ನು ಕಲ್ಪಿಸಬಾರದು...ಯಾರಿಗೂ ಕೆಡುಕನ್ನ ಬಯಸಬಾರದು...ಎಲ್ಲರೂ ದೈವ ಸ್ವರೂಪಿಗಳೇ.....ಕಾರಣ ಎಲ್ಲರನ್ನು ಪ್ರೀತಿಸಿ...ಏನನ್ನೂ ಅಪೇಕ್ಷಿಸದೆ ಮಾಡುವ ಪ್ರೇಮದಲ್ಲಿ ಸಿಗುವ ತ್ರುಪ್ತಿ...ಅದಕ್ಕೆ ಅದೇ ಸಾಟಿ...


ನೂರಾರು ಅಲೋಚನೆಗಳು....ಚಾರಿತ್ರಿಕವಾಗಿ ನೋಡಿದರೆ ಅವೆಲ್ಲಾ ಅದ್ಭುತ ಗುಣಗಳು! ಆದರೆ ಇವೆಲ್ಲವುಗಳನ್ನ ನನ್ನ ಸಹಮಿತ್ರರಿಗೆ ಹೇಗೆ ಹ೦ಚಬಲ್ಲೆ...ಎನ್ನೋದೊ೦ದೇ ದೊಡ್ಡ ಸಮಸ್ಯೆ..


ಸಮುದ್ರದ ದಡಕ್ಕೆ ಬಾರಿ ಬಾರಿ ಅಲೆಗಳು ಬ೦ದು ಬಡಿಯೋದಿಲ್ವಾ...ಹಾಗೇನೇ...ವಿಚಾರಗಳು,ಅಭಿಪ್ರಾಯಗಳು ಪದೇ ಪದೇ ಬರಹಕ್ಕೆ ಮನಸ್ಸನ್ನ ಕದ್ದೊಯ್ತಿವೆ...


ಕಾಲಿಗೆ ಸ್ವಲ್ಪ ಧೂಳಾದರೂ ತೊಳೆದುಕೊ೦ಡು ಬರುವ ಸ್ವಭಾವ ನನ್ನದು..ಆದರೆ ಈಗ ಮುಗ್ಧ ಮನಸ್ಸಿನ ಆಳೆತ್ತರದ ಆಲೋಚನೆಗಳಲ್ಲಿ ಸ್ವಾರ್ಥದ ಧೂಳಿನ ಕಣಗಳಿವೆಯಾ?? ಅ೦ತ ಪುಟ್ಟ ಅನುಮಾನ...ಆದರೂ ಪರವಾಗಿಲ್ಲ ಸ್ವಾರ್ಥಿ ಖ೦ಡಿತ ಆಗ್ತೀನಿ...ಮೋಕ್ಷಕ್ಕೆ ಹೋಗೋ ದಾರೀನಲ್ಲಿ...ಎಲ್ಲರನ್ನ ಬಿಟ್ಟು ಒಬ್ಬ೦ಟಿಗಳಾಗಿ!!!


ಅಮ್ಮ ಹೇಳಿದ ಪಾಠವಿದು..
ಅವಳಲ್ಲಿ ಈ ವಿಚಾರವನ್ನ ಕೇಳಿದಾಗ "ಸ್ವಾರ್ಥಿಯಾಗಿರಬೇಕು" ಎ೦ದಾಕೆ ಹೇಳಿದಾಕ್ಷಣ..ಮನಸ್ಸು ಒಪ್ಪಲ್ಲಿಲ್ಲ...ಪೆದ್ದ ಮನಸು..
ಹೋಗೋ ದಾರೀನಲ್ಲಿ ತಿಳೀದೇ ಇರೋವರಿಗೆ ತಿಳಿಸಿ ಹೇಳಿ ಅವರಿಗೂ ದಾರಿ ತೋರಿಸಿ ಮುನ್ನಡೆಯಬೇಕು ಅನ್ನೋ ಹುಚ್ಚಾಲೋಚನೆಯಲ್ಲಿ ಮುಳುಗಿದ್ದೆ...

....ಆದರೆ ಮತ್ತದೇ ತಪ್ಪನ್ನ ಮಾಡೋಕೆ ಒಪ್ತಿಲ್ಲ ಮನಸ್ಸು...


ಹಾಗಾದರೆ....ಹ್ರುದಯ ವೈಶಾಲ್ಯತೆಯಿಲ್ಲವಾ??? ನನ್ನ ಪ್ರಕಾರ..ಹ್ರುದಯ ವೈಶಾಲ್ಯತೆ ಮತ್ತು ಸ್ವಾರ್ಥಕ್ಕೂ ಇಲ್ಲಿ ಸ೦ಬ೦ಧವಿಲ್ಲ...ಈ ಸ್ವಾರ್ಥ..ಸ್ವಾರ್ಥವೇ ಅಲ್ಲ...ನಮನ್ನ ನಾವು ಕ೦ಡುಕೊಳ್ಳೋಕೆ ಹುಡುಕಿಕೊ೦ಡ ಮಾರ್ಗ ಅಥವಾ ಗುರುವಿನಿ೦ದ ತಿಳಿದ ಹೆದ್ದಾರಿ....ಹಾಗಾದರೆ ಗುರು ಯಾರು??


ನಮ್ಮ ಮನಸ್ಸಾಕ್ಶಿಯೇ ಗುರು, ತಪ್ಪು ಮಾಡಲೆತ್ನಿಸಿದಾಗ ಬುದ್ಧಿಕಲಿಸುವ,ಕೆಟ್ಟ ಆಲೋಚನೆಗಳ ಮಾಡಿದಾಗ ನಮ್ಮ ಮೇಲೆ ನಮಗೇ ಅಸಹ್ಯ ಮೂಡಿಸುವ,ಸನ್ಮಾರ್ಗದಲ್ಲಿ ಆತ್ಮವನ್ನ ಕೊ೦ಡೊಯ್ಯುವ, ಜೀವನದ ಸಾರ್ಥಕತೆಯಲ್ಲಿ ಬಹುಪಾಲನ್ನ ತನ್ನದಾಗಿಸಿಕೊಳ್ಳುವ, ಜೀವನ್ಮುಕ್ತಿಗಾಗಿ ಬಾಯಾರಿಸಿದಾಗ ಅಮೃತವಾಗುವ ನಮ್ಮ ಮನಃ ಸಾಕ್ಷಿಯೇ ನಮ್ಮೆಲ್ಲರ ಗುರು..


Sunday, March 8, 2009

ಸತ್-ಚಿತ್-ಆನಂದ.......



ತಂದೆ-ತಾಯಿ ;ಗಂಡ-ಹೆಂಡತಿ;ಬಂಧು-ಬಳಗ ಹೆಸರಿಗೆ...
"ಸಾಯಿ" ಒಬ್ಬನೇ ಸರ್ವ ಕಾಲಕೂ,ಸರ್ವ ಜೀವಕೂ ಆಸರೆಗೆ...

ಬರಿಯ ಮಾಂಸ ತುಂಡಿನ ಈ ದೇಹದಲ್ಲಿನ ಜೀವಕೆ
ನೂರು ನಂಟುಗಳು ಬಿಗಿದು ಬಾಳ ಪಯಣಕೆ..
ಇಷ್ಟು,ಮತ್ತಷ್ಟು,ಮಗದಸ್ಟು ಆಸೆಗಳ ಬೇಡಿಕೆ
ತಿಳಿಯುವುದು ಕೊನೆಗೆ ಇವೆಲ್ಲ ಬರಿಯ ದುಖಕೆ

ಸಂಬಂಧಗಳಿಗೆ ಕಡಿವಾಣ ಹಾಕಲಿದೊಂದು ಎಚ್ಚರಿಕೆ
ಜಗ ಮಿಥ್ಯವೆಂಬ ಮಾಯೆಯ ಸೀಳಲಿದೊಂದು ಕೋರಿಕೆ
ಸತ್ಯ ಪಥದಲಿ ಸವೆಸಿ ಈ ಜನ್ಮವ , ಮಾಡದೇ ತೋರಿಕೆ
ಇದಿಲ್ಲವಾದರೆ "ಸತ್-ಚಿತ್-ಆನಂದ" ನಾವಾಗುವುದಂತೂ ಮರೀಚಿಕೆ..!!!

ನನ್ನಾತ್ಮ........



ನಿಂತ ನೀರಂತೆ ಜೀವನೋದ್ದೇಶ ಸಾಗುತಿರಲು...
ಕಷ್ಟಗಳ ಮೇಲೊಂದು ಕಷ್ಟಗಳಿದಕೆ ದಾರಿಯಾಗಲು...

ಮಂಜಿನಂತೆ ಕರ್ಮಗಳು ಬೇಗ ಬೇಗ ಕರಗಲು..
ಆಸರೆಯಾಗಿ ಹರಿನಾಮವು ಸಹಕರಿಸಲು...

ಮರ್ಮವ ತಿಳಿಯಲು ತೊಳಲಾಡಿ..
ಆತ್ಮ ಜಿಜ್ಞಾಸೆಯ ಕ್ಷಣ ಕ್ಷಣವೂ ಮಾಡಿ

ದೇವಗಾಗಿ ಅತ್ತಿತ್ತ,ಸುತ್ತೆಲ್ಲ ಹುಡುಕಾಡಿ.,
ಶಾಂತಲಾದೆ ಕೊನೆಗೆ ಆತ್ಮನ ನನ್ನಲ್ಲೇ ನೋಡಿ ..!

ಅಂತರ ದೃಷ್ಟಿ.....



ಬೆತ್ತಲೆಯ ಬಾಹ್ಯದೃಷ್ಟಿಯು ಜಗದೊಳು...
ಅಜ್ನಾನವೆಂಬ ಕತ್ತಲೆಯಾವರಿಸಿ ಮನದೊಳು
ಹೊತ್ತೊತ್ತಿಗೆ ಕೂಳು ಸಿಗದೇ ತತ್ತರಿಸಿದೊಳು..,
ಮನುಜ ಮಾಡುತ ಜೀವನವ ದೌರ್ಜನ್ಯದೊಳು....


ಪಾಪ-ಪುಣ್ಯ ; ಕರ್ಮ-ಪರಿಸ್ಥಿತಿಗಳ ವಿಮರ್ಶೆಗಲೆಂದೂ
ಮಾಡದೆ ,ಅವಕಾಶ ಕಲ್ಪಿಸಿ , ನಿಮ್ಮ ಬಂಧುಗಳೆಂದು...

ಕ್ಷಮೆ-ಸಹನೆ ರಾರಾಜಿಸಲಿ ಹೃದಯದಲ್ಲಿ ಎಂದೆಂದೂ
ನಂಬಿರಿ ದೃಢವಾಗಿ ಎಲ್ಲರಲ್ಲಿರುವವ "ಸಾಯಿಯೇ" ಎಂದು.....

ಸುನಾಮಿ.....



ಸತತ ಸುರಿದ ಮಳೆಯಲ್ಲಿ
ಗುರುತಿಸದಾದೆ ಕಣ್ಣೀರ ಹನಿಗಳ
ಹಿಂದೆ ಮುಂದೆ ಬರುವವರ ಗಮನಿಸದಾದೆ..

ಕಹಿ ನೆನಪುಗಳ ಭೀಕರ ಗಾಳಿ
ಭಾವೊದ್ವೇಗಗಳ ಸುಳಿ
ಹೆಜ್ಜೆಯಿದಲಾರದೆ ಮನದ ತೊಯ್ದಾತದಲಿ
ಕುಳಿತುಬಿಟ್ಟೆ ಒಂದು ರಸ್ತೆ ಬದಿಯಲಿ...

ಬೇಡವೆಂದರೂ ಬೆನ್ನಟ್ಟಿ ಬರುತ್ತಿದೆ
ಸಹಿಸಲಾಗದ ನೋವಾವರಿಸುತ್ತಿದೆ
ಕ್ಷಣ ಕ್ಷಣಕ್ಕೂ ದೇವನ ಮೊರೆಹೊಕ್ಕುತ್ತಿದೆ

ಅಮ್ಮ ತುಂಬಿದ ಆತ್ಮಸ್ಥೈರ್ಯ,ವಿಶ್ವಾಸ
ಪುಟ್ಟ ತಂಗಿಯ ಮೊಗದ ಮಂದಹಾಸ
ಸಾಕೆನಗೆ ಮಾಡಲು ಹೆದರದೆ ಸಾಹಸ..

ಎದುರಿಸದೆ ಕಷ್ಟಗಳ ಹೆದಿಯಾಗಲಾರೆ..
ಮಾತಿನಿಂದಲೇ ಚುಚ್ಚುವವರ ದ್ವೆಶಿಯಾಗಲಾರೆ
ಮುಂದಿಟ್ಟ ಹೆಜ್ಜೆಯ ಹಿಂದೆಗೆಯಲಾರೆ.....

ಅಜ್ಞಾನ....



ಸುತ್ತಲೂ ಹೆಣೆದುಕೊಂಡ ಬಲೆಗೆ
ತಾನೇ ಕಾರಣವಾದರೂ ಜೇಡ
ಇದನರಿಯದೆ ಮುಂದುವರೆಸಿ
ಹೊರಬರಲು ತೊಳಲಾಡಿ
ಸಾಯುವುದು ಅದರಲ್ಲೇ...


ಹೊರತಲ್ಲ ಮನುಜ ಇದಕೆ
ಆಸೆ,ಕನಸುಗಳ ಹೊತ್ತ
ತನ್ನದೇ ಸಾಮ್ರಾಜ್ಯದಲ್ಲಿ
ಅಸ್ಪಸ್ಥ,ಅಸ್ಥಿರ ನಿದ್ರಾಲೋಕದಲ್ಲಿ
ಕೇವಲ ಕಲ್ಪನೆಗಳಿಂದ ಸುಖಿಸಿ
ನೈಜ ಜೀವನಕ್ಕೆ ಹೆದರಿ
ದೇವರ ಶಪಿಸಿ ಬಾರಿ ಬಾರಿ.....

ನೋಡುವರು ಆಕಾಶದತ್ತ
ಸೂರ್ಯನಬೆಳಕಿರಲಿ ಚಂದಮನೂ
ತನ್ನ ಬೆಳದಿಂಗಳ ಇವರೆಡೆಗೆ
ಕಾತುರದಿಂದ ನೀಡಲು ಅಡಿಗಡಿಗೆ
ಸನಿಹ ಬಂದರೂ,ಮನುಜ ತನ್ನ
ಬಲೆಯಿಂದ ಬರದಾದನು ಹೊರಗೆ
ಬರಿಯ ಕತ್ತಲೆಯಲಿ ಮುಳುಗಿ
ಅಳುವುದಕೂ ನಿಸ್ಶಕ್ತನಾಗಿ
ಪಯಣಿಸುವನು ಕೊನೆಗೆ ಸ್ಥಿರವಾಗಿ....



ತಪ್ಪು ಒಪ್ಪು....



ತಪ್ಪು ತನ್ನದಾದರೂ ಒಪ್ಪದ ಮನಸು
ಸುಳ್ಳಿನಿಂದಲೇ ಮರೆಮಾಚಿ
ತನಗೆ ತಾನೆ ನಾಚಿ
ಅಂಜಿಕೆ ,ಪಾಪಭೀತಿಗಳ ಗೀಚಿ
ಮಾದುತಲಿಹುದು ಅವಳ ಹುಚ್ಚಿ

ಅಂತರಗಕ್ಕೆ ಅರಿವಾದರೂ;
ನಟನೆಗಾಕೆ ಗುರುವಾದರೂ;
ಅವಳದನ ಗುರುತಿಸದಂತಿದ್ದರೂ
ಇರಲಾರನೆ ಮೇಲೊಬ್ಬ
ಇಳಿಸಲು ಇವಳ ಕೊಬ್ಬ?

Saturday, March 7, 2009

ಹಿಂಸಾಚಾರ - ಮುಕ್ತಿ ಎಂದು ????

"ದಯೆಯೇ ಧರ್ಮದ ಮೂಲವಯ್ಯ"
ಎಂದವರು ಬಹು ಹಿಂದೆ ದಾಸರು..
"ಕೊಲೆಯೆ ಧರ್ಮದ ನೀತಿಯಯ್ಯ"
ಎಂದವರು ಈಗಿನ ಪೊಲೀಸರು


ಹಸುಗೂಸು,ಸ್ತ್ರೀ,ಯುವ ಜನಾಂಗವು ಕಾಶ್ಮೀರದಲ್ಲಿ
ಕೊಲೆಪಾತಕರ ಗುಂಡೇಟಿಗೆ,ಭಯದಲ್ಲಿ
ಅಡುಗಿ,ನಡುಗಿ ಹೋಗುವರು ;ಬದುಕಲ್ಲಿ
ಆಸೆಗಳ ಕತ್ತರಿಸಿ,ತತ್ತರಿಸುವರು,ಜೀವದ ಹೆನಗಾತದಲ್ಲಿ...

ಭಯೋತ್ಪಾದಕ-ಪೊಲೀಸರ ಹೋರಾಟದಲ್ಲಿ
ಕೆಲವರ ಶರೀರವು ನೆತ್ತರ ಸ್ನಾನದಲ್ಲಿ
ಇನ್ನು ಕೆಲವರು ಜೀವದಾಸಇಂದ ಆಸ್ಪತ್ರೆಯಲ್ಲಿ
ಮಿಕ್ಕವರು ಸ್ಮಶಾನದಲ್ಲಿ ತಿರುಗಿ ಬರಲಾರದ ಲೋಕದಲ್ಲಿ....

ಧರ್ಮಪಾಥ ಕಲಿಸಲು ಹೊರಟ ಪೊಲೀಸರು
ಅದಕ್ಕೊತ್ತು ನೀಡಿದರೆ ಅರ್ಥವಿಲ್ಲವೆನ್ದರಿತರು..
ತಾವೂ ಭಯೋತ್ಪಾದಕರ ಹಾದಿಯೇ ಹಿಡಿದರು..
ರೋಷದಿಂದ,ಕರ್ತವ್ಯ ಪ್ರಜ್ಞೆ ಇಂದ ಅವರ ಚಚ್ಚ್ಚಿದರು

ಇದರಲ್ಲಿ ಮುಗ್ಧರಾಗುವರು ನುಚ್ಚ್ಚು ನೂರು
ಕಾರಣ ಇದಕ್ಕೆಲ್ಲ ಆ ನಯವನ್ಚಕರು..
ಪರಿಹಾರ ಇಲ್ಲವೇ?? ಉತ್ತರಿಸಲು ನಾಯಕರು..
ಪ್ರಶ್ನೆಗಳಿಗೆ ಬೆನ್ನು ಕೊಟ್ಟು ಕೂರುವ ಮೂಗರು..

ಕಾಶ್ಮೀರ ನಾಯಕರುಗಳು ಹಾಗಿರಲಿ,

ಈಗ ಮನೆ ಮನೆಯೂ , ಮನ ಮನವೂ ಕಾಶ್ಮಿರದಲಿ

ಇರುವಂತೆ ಹೊದೆದಾತದಲಿ,ನೋವಲಿ,ದುಖದಲಿ

"ಏಳಿ,ಎದ್ದೇಳಿ.." ವಿವೇಕಾನಂದರ ವಾಣಿ ಕಿವಿಯಲಿ

ಸುದೃಢ ಕನಸು ಕಣ್ಣಲ್ಲಿ- ಹುಮ್ಮಸ್ಸು,ಧೈರ್ಯ ಮನದಲಿ

ಧರ್ಮಕ್ಕೆ ಹೆಸರಾದ ಭಾರತ ಭೂಮಿಯಲ್ಲಿ

ನವಯುವ ಜನಾಂಗವು ಸಾಗಬೇಕು ಸತ್ಯಪಥದಲಿ

ನಿರೀಕ್ಷಿಸಬಹುದಾಗ ಭಾವ್ಯಜೀವನವ"

ವಿಶ್ವ ಕುತುಮ್ಬಿಗಲಾಗಿ .,ಅಭಿನವ

ಭಾರತೀಯರೆಂದು ಹೆಮ್ಮ ಪಡುವ

ಬದುಕು ನಮ್ಮದಾಗಲೆಂದು ಆಶಿಸುವ

ನಿಮ್ಮ,

ಸಾಯಿಶ್ರೀ

ಚುಟುಕ....



ನಾನೊಂದು ಕಡಲಂತೆ
ಮೇಲೆ
ನಗುವಿನ ಅಲೆಗಳು
ಒಳಗೆ
ಅಗ್ನಿಪರ್ವತಗಳು.....

ಜೀವನದಾಟ....



ಕೊಚ್ಚೆಯಲಿ ಹಾಕುವ ಪರಿಸರ ಸುತ್ತಮುತ್ತ
ಅರಿವಿಲ್ಲದಂತೆ ಮನುಜ ಪಡುವ ಪ್ರಾಯಶ್ಚಿತ್ತ
ಕರಗಿಸಲು ಪಾಪವನು ಸಹಕರಿಸಿ ಚಿತ್ತ
ತಿಳಿಯಲು ಅವಳ ಆಟದಲಿ ಇದೆಲ್ಲ ನಿಮಿತ್ತ


ಆಡದೆ ವಿಧಿಯಿಲ್ಲ ,ಪಾತ್ರಧಾರಿಗಳೇ ಎಲ್ಲ
ಯಮ-ನಿಯಮಗಳ ಪಾಲಿಸದೇ ಆಟವೇ ಇಲ್ಲ
ಜಯಾಪಜಯಗಳ ಮಾತೆಗೆ ಒಪ್ಪಿಸಿ
ಸೂತ್ರಧಾರಲು ಕೈ ಹಿಡಿದು ನಡೆಸುವಳು


ಪ್ರತಿ ಜೀವಿಗೂ ತಿದ್ದಿ ಹೇಳುತ
ಕಗ್ಗಲ್ಲಿಗೂ ಕರುಣೆಯ ನೀಡುತ
ಸುಂದರ ಶಿಲ್ಪವಾಗಿ ನಮ್ಮೆ ತೀದುತ
ಮೋಕ್ಷವ ನೀಡುವಳು ಸಾಯಿಮಾತ,ಜಗನ್ಮಾತ,ಶ್ರೀಮಾತಾ....


ಯೌವ್ವನ.... ವರವೋ ಶಾಪವೋ??



ಚಿಕ್ಕವಳಿದ್ದಾಗ ಆಡಿದ ಕುಂಟೆಬಿಲ್ಲೆ

ಜೂಟಾಟ..ಬೂಟ್ ಆಟಗಳು ;

ಮಳೆ ಬಂದಾಗ ಹಿಡಿಯಲೆತ್ನಿಸಿದ ಕಾಮನಬಿಲ್ಲೆ,

ಬಾಲ್ಯದ ಸವಿನೆನಪುಗಳು.



ಯೌವ್ವನಕ್ಕೆ ಕಾಲಿಟ್ಟ ಕ್ಷಣ

ಬದಲಾಯ್ತು ಜಗ ಕ್ಷಣ ಕ್ಷಣ

ಇದು ವರವೋ ಶಾಪವೋ ಕಾಣೆ..

ನನಗಂತೂ ಶಾಪವೇ ದೇವರಾಣೆ..



ನೋಡುವವರ ದೃಷ್ಟಿ ಬದಲಾಯ್ತು

ಮನದ ಭಾವಗಳು ಬದಲಾಯ್ತು

ಮನಸ್ಸಿಲ್ಲದ ಮನಸಿನಲಿ ಹೆಣಗಾಯ್ತು

ಹಸಿ ಹೃದಯ ಹುಸಿಯಾಯ್ತು...



ಭಾವನೆಗಳು-ಸಂಬಂಧಗಳು ಇವೆರಡ್ಕ್ಕಿರುವ ನಂಟು

ಬಿಡಿಸಲಾರ ಸ್ವತಃ ದೇವನೇ..ಕಾರಣ ಇದು ಬ್ರಹ್ಮ ಗಂಟು



ಇದಕ್ಕೆ ಇಲ್ಲದ ಅರ್ಥ ಕಲ್ಪಿಸಿ ಅಪಾರ್ಥ

ಮರೆಯುತಿಹರು ಮನುಜರು ಪುರುಷಾರ್ಥ

ಬಿಸುತುತಿಹರು ಬುಡದಿಂದ ಪಾರಮಾರ್ಥ

ನೋಯಿಸಿ ಇತರರ ,ಮೆರೆದು ತಂತಮ್ಮ ಸ್ವಾರ್ಥ...



ಸುಸ್ತಾದೆ, ಇವರ ತಿದ್ದಲೆತ್ನಿಸಿ,

ಬಸವಲಿದೆ ಇವರೆದುರು ಧೈರ್ಯ ಸಾಧಿಸಿ

ಮುನ್ನುಗ್ಗಿ ಮನ ತಟ್ಟುವ ರೀತಿ

ಹೇಳಿದರೂ ಬದಲಾಗಲಿಲ್ಲ ಇವರ ನೀತಿ



ಸಾಮಾಜಿಕ ಕರ್ತವ್ಯದ ಆಲೋಚನೆಯೂ

ಮನದೊಳಗಿನ ನೋವಿನ ಉಪಶಮನವು

ಆದರೂ ದುಖಃ ಉಮ್ಮಳಿಸಿ ಬರುವುದು

ಬಿಕ್ಕಳಿಸಿ ಕಣ್ಣಾಲಿಗಳು ಹನಿಗೂದುವುದು..



ಹೇಳಲಾಗದ ಪರಿಸ್ಥಿತಿಗಳು

ಗಬ್ಬೆದ್ದುಹೋದ ಭಾವನೆಗಳು

ಬರಬಾರದು ಯಾರಿಗೂ ಇಂಥ ಕಷ್ಟಗಳು

ತಿರುಗಿ ನೋಡಲಾಗದ ವಿಷ ಘಳಿಗೆಗಳು...



ಆಶಾವಾದಿ ನಾನು, ನಿತ್ತುಸಿರೆಲೆಯಲಾರೆ

ಇದಕ್ಕೆಲ್ಲ ಹೆದರಿ ಹೆದಿಯಾಗಲಾರೆ

ದೇವಾಧಿದೇವ ಶ್ರೀ ಸಾಯಿನಿಹನೆದೆಯಲ್ಲಿ

ಕಣ್ರೆಪ್ಪೆಯಂತೆ ಕಾಯುವನು ಅವನಾತದಲ್ಲಿ



ಕೆತ್ತದಾಯ್ತೆಂದು ಕೊರಗದೆ

ಬಿಡಲಾರೆ ಚಲವ ಸಾಧಿಸದೆ

ಭಾಗ್ಯವು ಬಂದಿದೆ ಬಯಸದೆ..

ಹರಿಯುತಿಹುದೆನ್ನ ಮೇಲೆ ಸಾಯಿಸುಧೆ..



ಜೀವನದುದ್ದಕ್ಕೂ ಇಡೀ ರೀತಿಯೇನೂ???

ಬರಿಯ ಯೌವ್ವನಕ್ಕಷ್ಟೇ ಅಲ್ಲ ಈ ಗೋಲು

ಮಾಡುತ ಎಲ್ಲವ ಮಾನವ ದಾನವನಾಗಿ,ಹಾಲು

ಇಡೀ ಮುಂದುವರೆದರೆ ಭವ್ಯ ಭಾರತವಾಗುವುದು ಪಾಲು



ವ್ಯಕ್ತಿತ್ವ ಮೌಲ್ಯ ಕುಸಿತವೇ - ಕೊರತೆ

ಪಾಪ ಪರಿಜ್ಞಾನವಿರಲಿ - ಜಾಗ್ರತೆ

ಬಾಳುವ ಒಂದಾಗಿ ಹೀಗೆ - ಸಾಯಿ ಸುತ,ಸುತೆ.

ಬೆಳೆಸಿ,ಹಂಚಿ,ಸುಖಿಸಿ,ಪ್ರೀತಿ,ಮಮತೆ