Saturday, March 7, 2009

ಹಿಂಸಾಚಾರ - ಮುಕ್ತಿ ಎಂದು ????

"ದಯೆಯೇ ಧರ್ಮದ ಮೂಲವಯ್ಯ"
ಎಂದವರು ಬಹು ಹಿಂದೆ ದಾಸರು..
"ಕೊಲೆಯೆ ಧರ್ಮದ ನೀತಿಯಯ್ಯ"
ಎಂದವರು ಈಗಿನ ಪೊಲೀಸರು


ಹಸುಗೂಸು,ಸ್ತ್ರೀ,ಯುವ ಜನಾಂಗವು ಕಾಶ್ಮೀರದಲ್ಲಿ
ಕೊಲೆಪಾತಕರ ಗುಂಡೇಟಿಗೆ,ಭಯದಲ್ಲಿ
ಅಡುಗಿ,ನಡುಗಿ ಹೋಗುವರು ;ಬದುಕಲ್ಲಿ
ಆಸೆಗಳ ಕತ್ತರಿಸಿ,ತತ್ತರಿಸುವರು,ಜೀವದ ಹೆನಗಾತದಲ್ಲಿ...

ಭಯೋತ್ಪಾದಕ-ಪೊಲೀಸರ ಹೋರಾಟದಲ್ಲಿ
ಕೆಲವರ ಶರೀರವು ನೆತ್ತರ ಸ್ನಾನದಲ್ಲಿ
ಇನ್ನು ಕೆಲವರು ಜೀವದಾಸಇಂದ ಆಸ್ಪತ್ರೆಯಲ್ಲಿ
ಮಿಕ್ಕವರು ಸ್ಮಶಾನದಲ್ಲಿ ತಿರುಗಿ ಬರಲಾರದ ಲೋಕದಲ್ಲಿ....

ಧರ್ಮಪಾಥ ಕಲಿಸಲು ಹೊರಟ ಪೊಲೀಸರು
ಅದಕ್ಕೊತ್ತು ನೀಡಿದರೆ ಅರ್ಥವಿಲ್ಲವೆನ್ದರಿತರು..
ತಾವೂ ಭಯೋತ್ಪಾದಕರ ಹಾದಿಯೇ ಹಿಡಿದರು..
ರೋಷದಿಂದ,ಕರ್ತವ್ಯ ಪ್ರಜ್ಞೆ ಇಂದ ಅವರ ಚಚ್ಚ್ಚಿದರು

ಇದರಲ್ಲಿ ಮುಗ್ಧರಾಗುವರು ನುಚ್ಚ್ಚು ನೂರು
ಕಾರಣ ಇದಕ್ಕೆಲ್ಲ ಆ ನಯವನ್ಚಕರು..
ಪರಿಹಾರ ಇಲ್ಲವೇ?? ಉತ್ತರಿಸಲು ನಾಯಕರು..
ಪ್ರಶ್ನೆಗಳಿಗೆ ಬೆನ್ನು ಕೊಟ್ಟು ಕೂರುವ ಮೂಗರು..

ಕಾಶ್ಮೀರ ನಾಯಕರುಗಳು ಹಾಗಿರಲಿ,

ಈಗ ಮನೆ ಮನೆಯೂ , ಮನ ಮನವೂ ಕಾಶ್ಮಿರದಲಿ

ಇರುವಂತೆ ಹೊದೆದಾತದಲಿ,ನೋವಲಿ,ದುಖದಲಿ

"ಏಳಿ,ಎದ್ದೇಳಿ.." ವಿವೇಕಾನಂದರ ವಾಣಿ ಕಿವಿಯಲಿ

ಸುದೃಢ ಕನಸು ಕಣ್ಣಲ್ಲಿ- ಹುಮ್ಮಸ್ಸು,ಧೈರ್ಯ ಮನದಲಿ

ಧರ್ಮಕ್ಕೆ ಹೆಸರಾದ ಭಾರತ ಭೂಮಿಯಲ್ಲಿ

ನವಯುವ ಜನಾಂಗವು ಸಾಗಬೇಕು ಸತ್ಯಪಥದಲಿ

ನಿರೀಕ್ಷಿಸಬಹುದಾಗ ಭಾವ್ಯಜೀವನವ"

ವಿಶ್ವ ಕುತುಮ್ಬಿಗಲಾಗಿ .,ಅಭಿನವ

ಭಾರತೀಯರೆಂದು ಹೆಮ್ಮ ಪಡುವ

ಬದುಕು ನಮ್ಮದಾಗಲೆಂದು ಆಶಿಸುವ

ನಿಮ್ಮ,

ಸಾಯಿಶ್ರೀ

No comments: